ಭಾನುವಾರ, ಸೆಪ್ಟೆಂಬರ್ 21, 2008

ಸತ್ಯವಾನ ಸಾವಿತ್ರಿಯ ಗುಟ್ಟು

ಸತ್ಯವಾನ ಸಾವಿತ್ರಿಯು ಯಮರಾಜನನ್ನು ಬಹಳವಾಗಿ ಪೀಡಿಸಿದರೂ ಅವನು ಸತ್ಯವಾನನ ಪ್ರಾಣವನ್ನು ಮರಳಿ ಕೊಡಲು ಒಪ್ಪಲಿಲ್ಲ. ಕೊನೆಗೆ ಸಾವಿತ್ರಿಯು "ಯಮರಾಜನೇ, ಕಡೇ ಪಕ್ಷ ಈ ಹೂವು ಬಾಡುವವರೆಗಾದರೂ ಪ್ರಾಣವನ್ನು ಹಿಂದಿರಿಗಿಸು " ಎಂದು ಹೇಳಿ ತನ್ನ ತಲೆಯಲ್ಲಿ ಸಿಗಿಸಿಕೊಂಡಿದ್ದ ಹೂವೊಂದನ್ನು ಕೊಟ್ಟಳು.
ಆಗ ಯಮರಾಜ "ಓ! ಹೂವು ತಾನೆ? ಇದು ಎಷ್ಟು ಹೊತ್ತು ಇದ್ದೀತು " ಎಂದುಕೊಂಡು, "ತಥಾಸ್ತು" ಎಂದನು.
ಕೂಡಲೇ ಸಾವಿತ್ರಿಯು ಸತ್ಯವಾನನ ಜೊತೆ ನಡೆದೇ ಬಿಟ್ಟಳು. ಇತ್ತ ಯಮರಾಜ ಹೂವು ಬಾಡುವುದನ್ನೇ ಕಾಯುತ್ತಿದ್ದ.
ಅದಂತೂ, ಅವನ ಜನ್ಮದಲ್ಲಿಯೂ ಸಾಧ್ಯವಾಗದ ಮಾತು. ಏಕೆಂದರೆ ಸಾವಿತ್ರಿಯು ಪ್ಲಾಸ್ಟಿಕ್ ಹೂವನ್ನು ಕೊಟ್ಟಿದ್ದಳು!
_____________________________________________________________________________________

ಕಾಮೆಂಟ್‌ಗಳಿಲ್ಲ: