ಬುಧವಾರ, ಸೆಪ್ಟೆಂಬರ್ 3, 2008

ವಿಕಟ ಚುಟುಕ ಮಾಲೆ - ಭಾರತದ ರಾಜಕೀಯ.

ಮನಮೋಹನ್ ಸಿಂಗ್
ಭಾರತ ಸರ್ಕಾರದ ಕಿಂಗ್.
***
ಸೋನಿಯಾ ಗಾಂಧಿ
ಭಾರತ ಸರ್ಕಾರ ಇವರ ಬಂಧಿ.
***
ಲಾಲ್ ಕೃಷ್ಣ ಅಡ್ವಾಣಿ
ಹುಡುಕುತ್ತಿದ್ದಾರೆ ಹಾದಿ
ರಾಮ ಜಿನ್ನಾರ ನಡುವಣ.
***
ಅಮರನಾಥ್ ಸಿಂಗ್ ಮುಲಾಯಮ್
ತಯಾರಿಸುತ್ತಿದ್ದಾರೆ
ರಾಜಕೀಯ ಕುದುರೆಗಳ ಲಗಾಮ್ .
***
ಪ್ರಕಾಶ್ ಕರಾಟ್
ಒಣ ಮಾತಿನ ಆರ್ಭಟ
ಉಳಿಯಿತು ಕೇವಲ ಚಿಪ್ಪಿನ ಕರಟ .
***
ಮಾಯಾವತಿ
ಸ್ಥಾಪಿಸಿಯೂ ಸ್ವಂತ ಮೂರುತಿ
ಕೀರ್ತಿಗಾಗಿ ಯಾವಾಗಲೂ ಹಲುಬುತಿ.
***
ಸೋಮನಾಥ್ ಚಟರ್ಜಿ
ಆಗಿದ್ದಾರೆ
ಗಲಭೆ ಮಾಡುವ ಸಂಸದರಿಗೆ ಭರ್ಜಿ.
***
ಅನಿಲ್ ಮತ್ತು ಮುಖೇಶ್ ಅಂಬಾನಿ
ಆಸ್ತಿಯ ವಿಭಜನೆ ಸರಿಯಿಲ್ಲವೆಂದು ಗುಮಾನಿ
ರಾಜಕೀಯ ಪ್ರಭಾವದಿಂದ ಭಾರಿ ಹಣಾಹಣಿ .
___________________________________________________________________

ಕಾಮೆಂಟ್‌ಗಳಿಲ್ಲ: